Wednesday 4 April 2012


ಅನುಭವ
ಅರ್ಥವಾಗದ  ಮಂತ್ರಗಳನು ಪಟಿಸುತಲಿ
ಮೆಚ್ಚಲೆತ್ನಿಸಿದೆ  ಆ ಮಾಯಾ ದ್ದಾಡಿ ಮರುರೂಪವ
ಬಿಟ್ಟೆ ನಾ  ನಿತ್ಯ ಕೆಲಸವ
ಮನೆ ಮಕ್ಕಳನು ಶಪಿಸುತಲಿ

ಬಯಸಿದೆ ನಾ ಲೋಕ ಕಲ್ಯಾಣವನು
ಒಬ್ಬನೇ ಜಯಿಸಲೆತ್ನಿಸಿದೆ ಲೋಕವನು
ಗಾಳಿಯೊಡನೆ ಗುದ್ದಾಡಿ ಮರುಗುವ 
ವ್ಯರ್ಥಮಾಡಿದೆ ನಾ ಸಂತಸದ  ಸಮಯವ

ಗೀಚಿದೆ ಆಶು ಕಾವ್ಯಗಳ ಸುರಿಮಳೆ
ಓದದವರ, ಮೂರ್ಖರ  ಮಡಿಲಿಗೆ
ಬೋಳ್ಗಲ್ಲಿಗೆ ಮಳೆಯೆರಚಿದ ಹಾಗೆ
ಚಿಗುರಿತು ಕಾವ್ಯ ರಚಿಸುವ ಕಡೆ ಒಲವು   

ಬರೆದ ಕಾವ್ಯಗಳ ಸಾರಿದೆ ಅಂತರ್ಜಾಲದಲಿ
ಹೆಬ್ಬೆಟ್ಟು ಚಿನ್ನೆ ಬಂತು ಮುಖಪುಸ್ಥಕದಲಿ
ವಿಮರ್ಶೆಗಳ ನೋಡಿದಾಗ ಮೂಡಿತು ಗೆಲುವು
ಯಾರೊಬ್ಬರು ತೊಡಿಸಲಿಲ್ಲ ಉಡುಗೊರೆಯ ಕೈಬಳೆ

No comments:

Post a Comment