Saturday 2 May 2015

ಹೀಗೊಂದು ಚಿಂತನೆ

ಎತ್ತ ಹೋಗುತ್ತಿದೆ ನಮ್ಮ ಸಮಾಜ....ಮೊನ್ನೆ ಒಂದು ಬಟ್ಟೆ ಶಾಪ್ ಗೆ ಹೋಗಿದ್ದೆ ...ಆಲ್ಲಿ ನನ್ನ ಪರಿಚಯದವರೊಬ್ಬರು ಬಂದಿದ್ದರು...ಅವರಿಗೆ ಒಂದು ಮಗಳಿದ್ದಾಳೆ ವಯಸ್ಸು10-12 ಇರಬೇಕು..ಕುಶಲ ಮಾತಾಡಿದ ನಂತರ ...ಅವರ ಕೈಯ್ಯಲ್ಲಿರೋ ಕವರು ತೆಗೆದು ತೋರಿಸುತ್ತ ಹೇಳಿದರು...ನೋಡು ಈ ಡ್ರೆಸ್ ಚನ್ನಾಗಿಲ್ವ ಅಂತ ನಾನು ನೋಡಿ ತುಂಬಾ ಚನ್ನಾಗಿದೆ ಅಂದೆ..ನಿಜವಾಗಿಯೂ ತುಂಬಾ ವರ್ಕ್ ಮಾಡಿದ ಲೆಹೆಂಗ ಸೆಟ್ ಚನ್ನಾಗೆ ಇತ್ತು.....ಆಗ ಅವರು ನೋಡು ಇದನ್ನೇ ಬದಲಾಯಿಸಿಕೊಂಡು ಹೋಗೋಣ ಅಂತ ಬಂದೆ..ಇಷ್ಟ ಪಟ್ಟು ಮಗಳಿಗೆ ಅಂತ ತಕೊಂಡೆ..ಇವಳು ನೋಡಿದರೆ ಬೇಡವೇ ಬೇಡ ಅಂತ ಒಂದೇ ಹಠ ಅಂದಳು ..ನಾನು ಯಾಕೆ ಅಂತ ಕೇಳಿದಾಗ 
..ಅವರ ಉತ್ತರ ಕೇಳಿ ನನಗೆ ಆಶ್ಚರ್ಯ ಆಗೋಯ್ತು....ಯಾಕೆಂದರೆ ಆ ಲೆಹೆಂಗದ ಬ್ಲೌಸ್ ಉದ್ದ ಇದೆಯಂತೆ...ಅವಳಿಗೆ ಚಿಕ್ಕದಾದ ಬ್ಲೌಸ್ ಬೇಕಂತೆ...ಲೆಹಂಗ ಮತ್ತು ಬ್ಲೌಸ್ ನಡುವೆ ಗ್ಯಾಪ್ ಇಲ್ಲ...ಗೌರಮ್ಮನ ಹಾಗೆ ಕಾಣುತ್ತೆ....ಹೊಕ್ಕಳು,ಸೊಂಟ ಕಾಣೋ ಹಾಗೆ ಇರಬೇಕು ನನ್ನ ಡ್ರೆಸ್ ಅಂತ ಗಲಾಟೆಯಂತೆ....ನಾನು ಆದರೂ ನೋಡೋಣ ಅಂತ ಪುಟ್ಟಿ ಈ ಡ್ರೆಸ್ ಎಷ್ಟು ಚನ್ನಾಗಿದೆ ಅಂತ ಹೇಳಿದಾಗ ಅಯ್ಯೋ ಆಂಟಿ ನಿಮ್ಮನ್ನು ನೋಡಿದರೆ ಮಾಡರ್ನ್ ಇದ್ದಾಗೆ ಕಾಣುತ್ತೆ...ಆದರೆ ನೀವು ಅಮ್ಮನ ಹಾಗೆ ಗೌರಮ್ಮನ ಅನ್ನಬೇಕ.....ನನಗೆ ಏನು ಹೇಳಲು ತಿಳಿಯದೇ ಪೆಚ್ಹಾಗೋ ಪರಿಸ್ತಿತಿ ಬಂತು....ಅಲ್ಲ ಇಷ್ಟು ಚಿಕ್ಕ ಮಕ್ಕಳ ತಲೆಯಲ್ಲಿ ಇಂತ ಯೋಚನೆಗಳೆಲ್ಲಾ ಹೇಗೆ ಬರುತ್ವೆ....ಮಕ್ಕಳ ಮುಗ್ದತೆ ಅನ್ನೋದು ಎಲ್ಲಿ ಮಾಯವಾಗ್ತಿದೆ... ಇದಕ್ಕೆಲ್ಲ ಕಾರಣನಾದ್ರು ಏನು....ಟಿವಿ ಪ್ರಭಾವ ಇರಬಹುದಾ....ಅಯ್ಯೋ ನೆನೆಸಿಕೊಂಡರೆ ಭಯ ಆಗುತ್ತೆ...ನಾವೆಲ್ಲಾ ಕಾಲೇಜ್ ಮುಗಿದರೂ ಅಪ್ಪ ಅಮ್ಮನ ಲಕ್ಷ್ಮಣ ರೇಖೆ ದಾಟಿ ನಡಿತಾನೆ ಇರಲಿಲ್ಲ....ಇಂತಹ ವಿಷಯಗಳಲ್ಲಿ ಜ್ಞಾನ ನೇ ಇರಲಿಲ್ಲ....ಯಾವುದೇ ಡ್ರೆಸ್ ಕೊಡಿಸಿದರೂ ಸಂತೋಷದಿಂದ ಹಾಕೊತಾ ಇದ್ವಿ...ನಮಗೆ ಈ ವಯಸ್ಸಲ್ಲೂ ಗೊತ್ತಿರದ ಎಷ್ಟೋ ವಿಷಯಗಳು ಇಂದಿನ ಮಕ್ಕಳ ಬಾಯಲ್ಲಿ ಸಲಿಸಾಗಿ ಓಡಾಡುತ್ತವೆ ..ಇದೆಲ್ಲ ಸುಧಾರಣೆಯ ದಾರಿಯೋ ಅಥವಾ ಅವನತಿಯ ದಾರಿಯೋ...ಒಟ್ಟಾರೆ ಇಂದಿನ ಮಕ್ಕಳು ಯಾವ ಕಡೆ ಮುಖ ಮಾಡಿದ್ದಾರೆ ಅನ್ನೋದೇ ತಿಳಿಯದ ವಿಷಯ....ಕಾಲಾಯ ತಸ್ಮೈ ನಮಃ......

Tuesday 28 April 2015

ಗೋ ಮಾತೆಗೂ ಹೋಟೆಲ್ ಶೋಕಿ....
ಭಾನುವಾರ ಹೆಚ್ಚಿನವರ ಮನೆಯಲ್ಲಿ ಬೆಳಗಾಗೋದು ತಡವಾಗೇ ಅಲ್ವಾ...ಹಾಗೆ ನಮ್ಮಲ್ಲೂ ಆವತ್ತು ಸೂರ್ಯ ತಡವಾಗೇ ಬಂದಿದ್ದ.....ಲೇಟ್ ಆದಾಗ ತಿಂಡಿ ಮಾಡೋಕು ಬೇಜಾರು...ಇವತ್ತು ತಿಂಡಿಯನ್ನ ಹೋಟೆಲ್ಇಂದ ತರೋಣ ಅಂತ ಹೋದ್ವಿ.....ಅದೊಂದು ಪುಟ್ಟ ಹೋಟೆಲ್..ಕ್ಲೀನ್ ಆಗಿ ಚನ್ನಾಗಿದೆ....ನಾವು ಯಾವಾಗಲೂ ಮನೆಗೆ ಪಾರ್ಸೆಲ್ ತರೋದು....ಅದ್ಕೆ ಅಲ್ಲಿ ಆರ್ಡರ್ ಕೊಟ್ಟು ನಿಂತಿದ್ವಿ.....ತುಂಬಾ ಜನರೆಲ್ಲಾ ಕೂತಿದ್ರು...ಆಗ ಒಮ್ಮೆಲೆ ಒಂದು ದೊಡ್ಡ ಬಿಳಿ ಬಣ್ಣದ ಜರ್ಸಿ ಹಸು ಹೋಟೆಲ್ ಒಳಕ್ಕೆ ಬಂದು cash ಕೌಂಟರ್ ಹತ್ರ ಬಂದು ನಿಂತಿತು .....ಆಗ ಹೋಟೆಲ್ ಮಾಲೀಕ ಅಯ್ಯೋ ಒಳಕ್ಕೆ ಯಾಕೆ ಬಂದೆ ಹೋಗು ಹೊರಕ್ಕೆ ಅಂದ್ರೆ ಅವನ ಮಾತು ಅರ್ಥ ಆದವರ ಹಾಗೆ ಇಲ್ಲ ಅನ್ನೋ ತರ ತಲೆ ಅಲ್ಲಾಡಿಸಿತು.....ಅವನು ಆಯ್ತು..ಆಯ್ತು ಮಾರಾಯ್ತಿ ಅಂತ ಹೇಳಿ ಕೆಲಸದ ಹುಡುಗರಿಗೆ ಬೇಗ ತಂದ್ರೋ ಲೇಟ್ ಆಯ್ತು ಅಂತ ಒಳಕ್ಕೆ ಬಂದಿದ್ದಾಳೆ ಅಂದ....ನಾವು ಇವನು ಏನು ಹೇಳ್ತಾನೆ ಅಂತ ನೋಡ್ತಾನೆ ಇದ್ವಿ....ಆಗ ಹುಡುಗ ಎರಡು ದೋಸೆ ಹಿಡಿದು ಬಾ ಅಂತ ಹೊರಕ್ಕೆ ಕರೆದ ಆಗ ಅದು ಹೊರಕ್ಕೆ ಹೋಗಿ ಆ ದೋಸೆ ತಿಂದು ಹೊರಟೋಯ್ತು.....ಆಗ ಹೇಳಿದ ಈ ಹಸು ಕರು ಇದ್ದಾಗಿಂದ ನಮ್ಮ ಹೋಟೆಲ್ಗೆ ಬಂದು ದೋಸೆ ತಿಂದು ಹೋಗೋದು ಅಂತ....ಕೇಳಿ ಆಶ್ಚರ್ಯ ಆಯ್ತು....ಮೂಕ ಪ್ರಾಣಿಗಳು ಹೇಗೆ ವರ್ತಿಸುತ್ತವೆ ಅಂತ...All living being become slaves to rutine and habit ಅಲ್ವಾ....ನೋಡಿ ಪ್ರೀತಿ ಅನ್ನೋದು ಹೇಗೆ ಎಲ್ಲ ಜೀವಿಗಳಲ್ಲೂ ಒಂದು ಹಕ್ಕನ್ನ ತಂದು ಬಿಡುತ್ತವೆ...ಹಾಗೆ ಅಂತ ಇದೇನು ಕೆಟ್ಟ ಹಕ್ಕಲ್ಲ....ಎರಡು ದಿನ ಅವಜ್ಞೆ ತೋರಿಸಿದರೆ ಕರಗಿ ಹೋಗುತ್ತೆ....ಆದರೆ ಪ್ರೀತಿನೆ ಹಾಗೆ....ಪ್ರೀತಿಸಿದವರಿಂದ ಸಣ್ಣ ಪ್ರತಿಕ್ರಿಯೆಯನ್ನಾದರೂ ನಿರೀಕ್ಷೆ ಮಾಡ್ತಾನೆ ಇರುತ್ತೆ.....ನೀವು ಅದನ್ನೆಲ್ಲ ಉದಾಸೀನ ಮಾಡ್ತಾ ಹೋದರೆ ಅಲ್ಲೊಂದು ದಿನ ಪ್ರೀತಿನೂ ಇರಲ್ಲ...ಪ್ರೀತಿಸೋರು ಇರಲ್ಲ......ಅದ್ಕೆ ಇರಬೇಕು ಪ್ರೀತಿ ಅನ್ನೋದು ಒಂದು ಜವಾಬ್ಧಾರಿ...ಒಂದು ಕಮಿಟ್ಮೆಂಟ್ ಅನ್ನೋದು.....

Friday 24 April 2015


ಕುಬೇರಜ್ಜ ತೋರಿದ ಪ್ರೀತಿ....

ನಾನು ಡಿಗ್ರೀ ಮುಗಿಸಿ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದ್ದ ಸಮಯ ...ಆಗ ನಾನು ಅಣ್ಣ ಅತ್ತಿಗೆ ಜೊತೆ ಮಲ್ಲೇಶ್ವರಂಅಲ್ಲಿ ಇದ್ದೆ....ಅಣ್ಣ ಬಾಡಿಗೆಗೆ ಇದ್ದ ಮನೆಯ ಓನರ್ ಹೆಸರು ಕುಬೇರ್ ....ವಯಸ್ಸಾದವರು...ತುಂಬಾ ದಪ್ಪ ಇದ್ರು....ಸಾತ್ವಿಕರು ...ಪೂಜೆ, ಪುನಸ್ಕಾರ ಮಡಿ...ಮೈಲಿಗೆ ಎಲ್ಲ ತುಂಬಾ ಜೋರಾಗಿ ಇದ್ದ ವ್ಯಕ್ತಿ......ಅವರಿಗೆ ನಾನು ಅಂದ್ರೆ ತುಂಬಾ ಪ್ರೀತಿ....ಆ ಸಮಯದಲ್ಲಿ ನನ್ನ ಅಕ್ಕ ಒಬ್ಬಳು ಜಾಬ್ ಗೆ ಹೋಗುವಾಗ ಅವಳ ಚಿಕ್ಕ ಮಗನನ್ನು ಅಣ್ಣ ನ ಮನೆಯಲ್ಲಿ ಬಿಟ್ಟು ಹೋಗ್ತಾ ಇದ್ದಳು...ಬರುವಾಗ ವಾಪಸ್ ಕರ್ಕೊಂಡು ಹೊಗೋಳು ...ಪಾಪ ನನ್ನ ಅಕ್ಕನ 
ಮಗನಿಗೆ ನನ್ನನ್ನ ಮಮತಾ ಅಂತ ಕರೆಯೋಕೆ ಬರದೆ ಪುತಾತ ಅಂತ ಕರಿತಿದ್ದ...ನನಗೂ ಅವನು ಮುದ್ದು ಮುದ್ದಾಗಿ ಪುತಾತ ಅಂದಾಗ ಏನೋ ಖುಷಿ ಆಗ್ತಿತ್ತು....ಅದನ್ನ ಕೇಳಿಸಿಕೊಂಡ ಈ ಕುಬೇರಜ್ಜ ಕೂಡ ನನ್ನನ್ನು ಪುತಾತ ಅಂತಾನೆ ಕರೀತಿದ್ರು ....ಯಾವಾಗಲೂ ಕೆಲಸದಿಂದ ಬರುವಾಗ ಬಾಗಿಲಲ್ಲೇ ನಿಂತು ಮಾತಾಡಿಸಿಯೇ ಹೋಗ್ತಿದ್ರು....ಆಮೇಲೆ ನನ್ನ ಮದುವೆ ಆಗಿ ಗಂಡನ ಮನೆ ಸೇರಿದೆ.....ಒಂದು ವರುಷದ ನಂತರ ತಿರುಗಾ ಅಣ್ಣ ನ ಮನೆಯಲ್ಲಿ ಉಳಿಯೋ ಪ್ರಸಂಗ ಬಂತು....ಎನಕ್ಕೆ ಅಂತ ತಿಳಿತಲ್ವ....ಒಡಲಲ್ಲಿ ಕರುಳ ಕುಡಿ ಒಡೆದಿತ್ತು ....ಮೊದಲ ಡೆಲಿವರಿ ತಾಯಿಮನೆಯಲ್ಲಿ ಅಂತ ಅಣ್ಣನ ಮನೆ ಬೆಂಗಳೂರಿಗೆ ಹೋದೆ.....ತಾಯಿ ಕೂಡ ಅಲ್ಲಿಗೆ ಬಂದಿದ್ದರು...ನವ ವಸಂತ ತುಂಬಿದ್ದ ನಾನು ಕುಬೇರಜ್ಜನಷ್ಟೆ ದೊಡ್ಡ ಹೊಟ್ಟೆ ಹೊತ್ತು ಕುಳಿತಿದ್ದೆ ಆ ದಿನ ಪುತಾತ ...ಪುತಾತ ಅಂತ ಕರೆಯುತ್ತ ಉಸ್ಸ್.. ಅಂತ ಉಸಿರು ಬಿಡುತ್ತಾ ಒಂದೊಂದೇ ಮೆಟ್ಟಿಲು ಹತ್ತುತ್ತ ಬಂದರು (ಮಹಡಿಯಲ್ಲಿ ನಾವಿದ್ದಿದ್ದು )ಕುಬೇರಜ್ಜ....ನಾನು ಆಯಿ ಹತ್ತಿರ ಮಾತಾಡ್ತಾ ಕೂತಿದ್ದೆ....ಏನು ಅಂತ ಕೇಳಿದಾಗ....ಪಾಪ ಬಸಿರು ಹುಡುಗಿ ತಿನ್ನಲಿ ಅಂತ ತಂದೆ ಅನ್ನುತ್ತ ಅವರ ಪ್ಯಾಂಟ್ ಕಿಸೆಯಿಂದ ಎರಡು ಬೇಸನ್ ಲಾಡು ತೆಗೆದು ಕೊಟ್ರು....ನನಗೆ ಏನು ಹೇಳಬೇಕೋ ಗೊತ್ತಾಗಿಲ್ಲ....ಅವರು ಒಂದು ಕವರ್ ಅಲ್ಲಿ ಕೂಡ ಹಾಕದೇ ಹಾಗೆ ಪ್ಯಾಂಟ್ ಜೋಬಲ್ಲಿ ಇಟ್ಕೊಂಡು ಬಂದಿದ್ರು.......ಆ ಪ್ಯಾಂಟ್ ಯಾವಾಗ ನೀರಿನ ಮುಖ ಕಂಡಿತ್ತೋ ಏನೋ....ತಿನ್ನೋಕೆ ಮನಸು ಒಪ್ಪುತ್ತಿರಲಿಲ್ಲ....ಬೇಡ ಅನ್ನೋಕೆ ಅವರ ಪ್ರೀತಿ ಕಾಳಜಿ ಅಡ್ಡ ಬರುತ್ತಿತ್ತು....ಆಯಿ ಮುಖ ನೋಡಿದೆ...ಆಯಿ ಒಂದು ಚುರಾದ್ರೂ ತಿನ್ನು ಅಷ್ಟು ಪ್ರೀತಿಯಿಂದ ನಿನಗಾಗಿ ತಂದಿದ್ದಾರೆ...ವಯಸ್ಸಾದವರು ಬೇರೆ ಅಂದಳು...ಅಂತು ಕಷ್ಟಪಟ್ಟು ಒಂದು ಚೂರು ತಿಂದು ಆಮೇಲೆ ತಿಂತೀನಿ ಅಂತ ಆ ಕಡೆ ಯೆತ್ತಿಟ್ಟೆ...ಮತ್ತೆ ಸ್ವಲ್ಪ ಹೊತ್ತು ಮಾತಾಡಿ ಕೆಳಗೆ ಹೋದ್ರು......ಕೆಲವೊಮ್ಮೆ ಅತಿ ಪ್ರೀತಿ ಎಂತಹ ಪೇಚಾಟಕ್ಕೆ ತಂದುಬಿಡುತ್ತೆ ಆಲ್ವಾ......

Wednesday 26 November 2014

ಇಲ್ಲೊಂದು ಪ್ರಣತಿ ಉರಿಯುತಿದೆ 
ತನ್ನ ಮೇರೆಯ ಮೀರಿ 
ದಗಿಸಿ ಪ್ರಜ್ವಲಿಸಿ ಶಾಖವನು ಎರಚಿ 
ತೈಲವೆರೆದರೆ ಕತ್ತಲೂ ಮಾಯಾ 
ಇದು ನಗುವ ನಂದಾದೀಪ ...
ಗಾಳಿಗೊಡ್ಡಿದರೆ ಗಾಡಂದಕಾರ
ನಿರ್ಲಿಪ್ತ ಶವದ ಸ್ಮಶಾನ ಮೌನ.........ಕೀಮ
ಅವನೊಬ್ಬ ಸನ್ಯಾಸಿ
ಮಾಡಿದ ಘನಘೋರ ಉಪದೇಶ
ಬ್ರಹ್ಮಚರ್ಯದ ಬಗ್ಗೆ
ರಾತ್ರಿ ಅವನಕೋಣೆಯಲಿ
ಊರ್ವಶಿಯರದ್ದೆ ಕಾರುಬಾರು ....
ಅವನೊಬ್ಬ ವಿಜ್ಞಾನಿ
ಹೇಳಿದ್ದೆಲ್ಲವೂ ವಾಸ್ತವ ಕಲ್ಪನೆಗಳ
ಜಗ ನಿಬ್ಬೆರಗಾಗೋ ಅಣಿಮುತ್ತುಗಳು
ಆದರವನ ಜೀವನದಲ್ಲಿ ಹೆಂಗಳೆಯರದೆ ಹಬ್ಬ...
ಉಪದೇಶವೆಂಬುದು ಆಚರಣೆಗಿಲ್ಲದ್ದು
ಜನರೆದಿರು ಪಾಂಡಿತ್ಯ ಪ್ರದರ್ಶನವಷ್ಟೆ
ಅವನುಪದೇಶವ ಅವನೇ ರೂಢಿಸಲಶಕ್ತ ನಾದರೆ
ಅವನೆಂತಹ ಸನ್ಯಾಸಿ...ಅವನೆಂತಹ ವಿಜ್ಞಾನಿ........ಕೀಮ
ನನ್ನಿಂದ ಆದ ತಪ್ಪಾದರೂ ಯಾವುದು ಅರಿಯೆ 
ನಿನ್ನೀ ಮೌನಕೆ ಅರ್ಥವನೂ ತಿಳಿಯೆ 
ಹೇಳಿಬಿಡು ಒಮ್ಮೆ ನನಗೆ ತಿಳಿವಂತೆ
ನಾ  ನಡೆವೆ  ಅದರಂತೆ...........................ಕೀಮ 

Thursday 20 November 2014

ಇವತ್ತು ಬೆಳಿಗ್ಗೆ ಉಪ್ಪಿಟ್ಟಿಗೆ ರವೆ ಹುರಿತಾ ಇರುವಾಗ ಇದ್ದಕ್ಕಿದ್ದಲ್ಲೇ ಅಳು ತಡೆಯದೆ ಒಂದೈದು ನಿಮಿಷ ಬಿಕ್ಕಿದೆ...ನನಗೆ ಆಶ್ಚರ್ಯ ನನಗೇನಾಯ್ತು ಅಂತ ಏನೋ ತೀವ್ರವಾದ ನೋವು ಮನಸ್ಸಿಗೆ ..ತುಂಬಾ ಯೋಚಿಸಿದಾಗ ನನ್ನೆದಿರು ಬಂತು ನಿಂತಿದ್ದು ಅದೇ ಮಂಜುಳ ಅಲ್ಲಲ್ಲ ಸರ್ಕಲ್ ಮಂಜುಳನ ಪ್ರತಿಬಿಂಬ....ದಿನಾಲೂ ಟಿವಿ ,ಪೇಪರ್ ,ಮುಖಪುಸ್ತಕ ಹೀಗೆ ಎಲ್ಲೆಂದರಲ್ಲಿ ಬರೇ ಮುಗ್ದ ಮಕ್ಕಳು ಲೈಂಗಿಕತೆಗೆ ಬಲಿಯಾಗುತ್ತಿದ್ದ ಸುದ್ದಿ ನನಗರಿವಿಲ್ಲದೇ ನನ್ನ ಮನಸ್ಸಿನ ಆಳದಲ್ಲಿ ಕೂತು ಚಡಪಡಿಕೆ ತಂದಿದೆ....ನಾನೂ ಹೆಣ್ಣಾಗಿರುವದಕ್ಕೋ ಏನೋ ನನ್ನ ಒಡಲೂ ಮೂಖವಾಗಿ ರೋಧಿಸುತ್ತಿದೆ....ಲೈಂಗಿಕತೆ ಇಬ್ಬರ ಒಪ್ಪಿಗೆ ಯಿಂದ ನಡೆದರೆ ..ಅದು ಮಿಲನ ಮಹೋತ್ಸವ,ವೈಭವ...ಅದೇ ಬಲವಂತದಿಂದ ನಡೆದರೆ ಧಾರುಣ..ಯಾರಿಗೂ ಮುದ ನೀಡದ ರಾಕ್ಷಸೀಯ ಕ್ರಿಯೆ ..ಇದು ಯಾಕೆ ಜನರಲ್ಲಿ ಅರಿವಾಗುತ್ತಿಲ್ಲ....ಪಾಪ ಈ ಮಂಜುಳನಂತವರ ಗತಿ ಊಹಿಸಿದರೆ ಹೆಣ್ಣು ಜನ್ಮ ಒಂದು ಶಾಪವೆನಿಸುತ್ತಿದೆ...ಹೌದು ಮಂಜುಳ ಯಾರು ಹೇಳ್ತೀನಿ......ಆಗಿನ್ನು ನಾನೂ ಹೈಸ್ಚೂಲ್ ಓದ್ತಾ ಇದ್ದೆ..ಮನೆಯಲ್ಲಿ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿ ,ಸಂಪ್ರದಾಯಿಕವಾಗಿ ಬೆಳೆಸಿದ್ದ ಕಾರಣ ಅಕ್ಕ ಪಕ್ಕದ ಮನೆಗೆಲ್ಲ ಹೋಗಿ ಮಾತಾಡ್ತಾ ಕೂರೋ ಅಭ್ಯಾಸ ಇರಲಿಲ್ಲ....ಅದಕ್ಕಾಗಿ ಪ್ರತಿವರ್ಷ ಸ್ಕೂಲ್ ರಜೆ ಬಂದಾಗ ನಾನು ಬೆಂಗಳೂರಿಗೆ ಅಣ್ಣನ ಮನೆಗೆ ಹೋಗ್ತಿದ್ದೆ...ಆ ಹಳ್ಳಿಯಲ್ಲಿ ಸರಿಯಾದ ಬಸ್ ವ್ಯವಸ್ಥೆ ಇರದ ಕಾರಣ ನಾಲ್ಕು ಘಂಟೆಗೆ ಬರೋ ಬಸ್ಸಗೇ ಹೊನ್ನಾವರಕ್ಕೆ ಹೋಗಿ ರಾತ್ರಿ ಎಂಟೋ ಒಂಬತ್ತೋ ಘಂಟೆಗೆ ಹೋಗೋ ಬೆಂಗಳೂರು ಬಸ್ ಹಿಡಿಬೇಕಾಗಿತ್ತು...ಹಾಗಾಗಿ ಬಸ್ ಸ್ಟ್ಯಾಂಡ್ ಅಲ್ಲಿ ತುಂಬಾ ಹೊತ್ತು ಕಳೆಯೋ ಪ್ರಸಂಗ......ಅಂತ ಒಂದು ಟೈಮ್ ಅಲ್ಲಿ ಕಣ್ಣಿಗೆ ಬಿದ್ದವಳು ಈ ಮಂಜುಳ...ಸರ್ಕಲ್ ಮಂಜುಳಾ ಎಂದೇ ಎಲ್ಲರ ಬಾಯಲ್ಲಿ ಪ್ರಸಿದ್ಧವಾದವಳು...ಯಾಕೆಂದರೆ ಹಗಲಿಡಿ ಅವಳು ಹೈವೇ ಬಸ್ ಸ್ಟಾಪ್ ಅಲ್ಲೇ ಕಳೆಯುತ್ತಿದ್ದಳು...ಸಾಯಂಕಾಲ ಆದ ತಕ್ಷಣ ಹೊನ್ನಾವರದ ಮೇನ್ ಬಸ್ ಸ್ಟ್ಯಾಂಡ್ ಗೆ ಬರುತ್ತಿದ್ದಳು....ನಾ ನೋಡಿದಾಗ ಮಂಜುಳ ಪ್ರಾಯದ ಹುಡುಗಿ...ಸುಮಾರು ಇಪ್ಪತ್ತೈದು ವರ್ಷ ಇರಬಹುದು.. ಇವಳು ಮಾನಸಿಕ ಅಸ್ವಸ್ಥೆಯಾಗಿದ್ದಳು...ಕೆದರಿದ ಕೂದಲು,ಹರಕಲು ಮೈ ಕಾಣುವಂತ ಬಟ್ಟೆ...ಬೆಳೆದ ಉಗುರುಗಳು ..ಕಾರಣವಿಲ್ಲದ ನಗು, ಏನೇನೋ ಅರ್ಥವಿಲ್ಲದ ಬಡಬಡಿಕೆ ...ಯಾರಾದರು ಕೊಟ್ಟ ತಿಂಡಿ ತಿನ್ನುತ್ತ ಅವಳದೇ ಲೋಕದಲ್ಲಿ ವಿಹರಿಸುತ್ತಿದ್ದವಳು....ವಯಸ್ಸಲ್ಲಿ ಅಷ್ಟು ದೊಡ್ದವಳಾದರೂ ಮುಖದಲ್ಲಿ ಅದೇನೋ ಮುಗ್ಧತೆ....ನಗುವ ಆ ಕಣ್ಣುಗಳಲ್ಲಿ ಅದೇನೋ ಹೊಳಪು.....ನಾನು ಎಷ್ಟೋ ಹೊತ್ತು ಅವಳನ್ನೇ ನೋಡುತ್ತಾ ಕುಳಿತಿದ್ದೆ....ಇದು ಪ್ರತಿ ವರ್ಷ ..ಸುಮಾರು ಮೂರು ನಾಲ್ಕು ವರ್ಷ ಸತತ ಸ್ಕೂಲ್ ರಜೆಯಲ್ಲಿ ನಾನು ಕಂಡ ದೃಶ್ಯ......ಆಮೇಲೆ ನಾನು ಕಾಲೇಜ್ ಗೆ ಹೊನ್ನಾವರಕ್ಕೆ ಹೋಗಲು ಶುರು ಮಾಡಿದಾಗ ಅವಳನ್ನ ದಿನಾಲೂ ಹೈವೇ ಸರ್ಕಲ್ ಅಲ್ಲಿ ನೋಡುತ್ತಿದ್ದೆ..ಅಷ್ಟು ವರ್ಷದಿಂದ ನಾನು ಯಾವ ಬದಲಾವಣೆಯನ್ನೂ ಅವಳಲ್ಲಿ ಕಾಣಲಿಲ್ಲ......ಹೀಗೆ ದಿನಗಳು ಉರುಳುತ್ತಿರಲು ಇದ್ದಕ್ಕಿದ್ದಂತೆ ಮಂಜುಳಾ ಸರ್ಕಲ್ಲಿಂದ ಕಾಣೆ ಆಗಿದ್ದಳು.....ಒಮ್ಮೆ ಕುತೂಹಲ ತಡೆಯದೆ ಸರ್ಕಲ್ ಅಲ್ಲಿ ಇರೋ ಒಂದು ಹಣ್ಣಿನ ಅಂಗಡಿಯವನ ಬಳಿ ಅವಳ ಬಗ್ಗೆ ವಿಚಾರಿಸಿದಾಗ ತಿಳಿಯಿತು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಅವಳು ಗರ್ಭಿಣಿ ಎಂದು..ಕೇಳಿ ಅಲ್ಲೇ ಬಿಕ್ಕಳಿಸಿದ್ದೆ ಅವಳ ಅಸಹಾಯಕತೆ ಕಣ್ಣಮುಂದೆ ಕಟ್ಟಿದಂತಾಗಿ ...ಹಗಲೆಲ್ಲ ಹುಚ್ಚಿ ಥೂ ಅಂತೆಲ್ಲ ಉಗಿಯೋ ಜನರು ರಾತ್ರಿ ಆದಾಗ ಅದೇ ಹುಚ್ಚಿಯ ದೇಹವನ್ನೇ ರಣಹದ್ದುಗಳಂತೆ ಕುಕ್ಕುವದ ನೆನೆದು ... ಕೊನೆಗೊಂದು ದಿನ ತಿಳಿಯಿತು ಅವಳು ಮಗುವಿಗೆ ಜನ್ಮ ಕೊಡುವಾಗ ಸತ್ತಳು ಅನ್ನೋ ಸುದ್ಧಿ...ಹೀಗೆ ಮಂಜುಳನಂತವರು,ಅಸಹಾಯಕ ಮುಗ್ಧ ಮಕ್ಕಳು,ಹೀಗೆ ಅದೆಷ್ಟು ಹೆಣ್ಣು ಜೀವಗಳು ಇಂತ ಮೃಗೀಯ ವರ್ತನೆಗೆ ಬಲಿಯಾಗುತ್ತಿದ್ದಾರೋ ..ಇದಕ್ಕೆ ಉತ್ತರ ನೀಡುವವರಾರು ,ಇವರಿಗೆಲ್ಲ ಎಲ್ಲಿಯ ರಕ್ಷಣೆ...ತಮ್ಮಮೇಲೆ ಏನು ನಡೆಯುತ್ತಿದೆ ಎನ್ನೊ ಕನಿಷ್ಠ ಜ್ಞಾನವೂ ಇಲ್ಲದ ಇವರ ಪರಿಸ್ಥಿತಿ ಸುಧಾರಿಸುವದಾದರೂ ಎಂತು.......ಮನಸಾರೆ ಒಪ್ಪಿ ಸೇರಿ ಹೆಣ್ಣಿನ ಜನ್ಮಕ್ಕೆ ಸಾರ್ಥಕ್ಯ ಕೊಡುವ ಕ್ರಿಯೆ ಇಂದು ಬಲವಂತ ದೌರ್ಜನ್ಯದಿಂದ ಹೆಣ್ಣಿನ ಜನ್ಮವೇ ಶಾಪ ಅನ್ನೋ ಪರಿಸ್ಥಿತಿ ಬಂದಿರುವುದು ಶೋಚನೀಯ....ಇಂತವರಿಗೆಲ್ಲ ಧಿಕ್ಕಾರ ವಿರಲಿ....