Wednesday 4 April 2012


ಓ ಮನಸೇ

ಓಡಬೇಡ ಓ ಮನಸೇ ಹಗಲುಗನಸುಗಳ ಹಿಂದೆ
ಮುನ್ನುಗ್ಗು ದೈರ್ಯದಿ ಬದುಕಿನ ಹಾದಿಯಲಿ ಮುಂದೆ
ಹಾಕಿಕೊ ನಿನಗೆ ನೀ ಕುದುರೆ ಲಗಾಮು
ಹಚ್ಚಿಕೊ ಜೊತೆಗೆ ವಾಸ್ತವತೆಯ ಮುಲಾಮು

ಬಣ್ಣದಲಿ ಮೂಡುವ ಕನಸೆಲ್ಲ ನಿಜವಲ್ಲ
ಬಯಸಿದಂತೆ ಜಗ ನಡೆಯಲೆಂಬುದು ತರವಲ್ಲ
ಅವಸರಿಸಿದರೆ ಬದುಕೊಂದು ಕಗ್ಗಂಟಿನ ಮಜಲು
ತಾಳ್ಮೆಯಲಿ ಬಿಡಿಸು ನೀ ಒಂದೊಂದು ಗೋಜಲು

ಪರರ ಮಾತಿಗೆ ನೀ ದ್ರುಥಿಗೆಡಬೇಡ
ಗೆಲುವು ಬೇಕೆಂದರೆ ಸಾಧನೆಯ ಬಿಡಬೇಡ
ಗುರಿಯ ಕಡೆಗೇ ಇರಲಿ ನಿನಗೆಂದು ಛಲ
ಯಾವದೇ ಸ್ಥಿತಿಯಲು ಆಗಬೇಡ ವಿಚಲ

ಬಲಿಯಾಗದಿರು ಎಂದೂ ಅವಸರದ ನಿರ್ಣಯಕೆ
ಅದರಿಂದ ಕುಸಿಯಬೇಡ ನೀ ಪಾಥಾಳಕೆ
ಕಾಯ್ದುಕೊಳಲೇ ಬೇಕು ಎಂದಿಗೂ ಸ್ಥಿರತೆ
ಇದು ಸುಳ್ಳಲ್ಲ ಎಂದಿಗೂ ಸತ್ಯಮೇವ ಜಯತೆ .  

No comments:

Post a Comment