Wednesday 4 April 2012


ನೀರೀಕ್ಷೆ
ನೀ ಬರುವಿಯೆಂದು ಕಾಯುತಿಹೆ ಗೆಳೆಯ
ಆದರೆ ನೀನ್ಯಾಕೆ ತಿರುಗಿ ಬರಲಿಲ್ಲ
ಕೇಳದೆ ಇನ್ನೂ ನಿನಗೆ ನನ್ನೆದೆಯ
ಮೌನ ರಾಗ

ಕ್ಷಣ ಕ್ಷಣವೂ ಕುಗ್ಗುತಿದೆ ನಂಬಿಕೆ
ಹತಾಶೆ ಮೂಡುತಿದೆ ನನ್ನ ಮನದಲ್ಲಿ
ಆದರೂ ಬರುವೆಯೆಂಬ ಆಸೆಯಾಬಲೆ
ಹೃದಯದಾ ಮೂಲೆಯಲ್ಲಿ

ಬಂದು ನೀ ಸಂತೈಸುವೆ ನುಡಿದು
ಬಿಡು ನೀ ಹಿಂದಿನಾ  ಚಿಂತೆ
ಸಾಗೋಣ ಧೈರ್ಯದಲಿ ಬಾಳ ನೌಕೆಯಲಿ
ಮುಂದಿಹುದು ನಮಗೆ ಸಂತೋಷದ ಕಂತೆ  



No comments:

Post a Comment