Monday 10 November 2014

ಇದೊಂದು ಸಣ್ಣ ಕಥೆ.....ತುಂಬಾ ಜನ ಸೇರಿ ಎಲ್ಲೋ ಹೊರಟಿದ್ದರು....ನಡೆಯುತ್ತಾ ದಾರಿಯಲ್ಲಿ ಅವರಿಗೆ ದಣಿವಾಯಿತು ಆಲ್ಲೆ ಪಕ್ಕದಲ್ಲಿದ್ದ ಶಿವ ದೇವಸ್ತಾನದಲ್ಲಿ ವಿಶ್ರಮಿಸಲೆಂದು ದೇವಸ್ಥಾನದ ಒಳಕ್ಕೆ ಹೋಗುತ್ತಾರೆ....ಅಲ್ಲಿ ಶಿವನ ಮುಂದೆ ಒಂದು ದೊಡ್ಡ ನಂದಿ ವಿಗ್ರಹ ಇತ್ತು....ಒಬ್ಬನಿಗೆ ಅದನ್ನು ಮುಟ್ಟಿ ನೋಡುವ ಆಸೆ ಆಯ್ತು ..ಆ ನಂದಿ ವಿಗ್ರಹದ ಬಳಿ ಹೋಗಿ ಅದರ ಮೈ ದಡವುತ್ತ ಅದರ ಮೂಗಿನ ಹೊರಳೆಯಲ್ಲಿ ಕೈ ಇಡುತ್ತಾನೆ...ಅದರಲ್ಲಿ ಮೊದಲೇ ಸ್ಥಾಪಿತವಾದ ಒಂದು ಚೇಳು ಇವನ ಕೈಗೆ ಕಚ್ಚಿತು,..ಆಗ ಅವನು ಹಾ ಅಂತ ಕಿರಿಚಿದ ಮಲಗಿದ್ದ ಉಳಿದವರು ಏನಾಯ್ತು ಅಂತ ಕೇಳುತ್ತಾರೆ ....ಆಗ ಅವನಿ ತಕ್ಷಣ ಒಂದು ಯೋಚನೆ ಬರುತ್ತದೆ,...ತಾನೊಬ್ಬನೇ ಯಾಕೆ ನೋವು ಮಾಡಿಕೊಳ್ಳಬೇಕು ಉಳಿದವರಿಗೂ ನೋವಾಗಲೀ ಅನ್ನೋ ದುರಾಸೆ ಕಾಡುತ್ತೆ...ಅದಕ್ಕಾಗಿ ಅವನು ತಕ್ಷಣ ಮೊಗದಲ್ಲಿ ನಗು ತಂದುಕೊಂಡು ವ್ಹಾ ಈ ನಂದಿಯ ಮೂಗಲ್ಲಿ ಅದ್ಭುತ ಶಕ್ತಿಯಿದೆ ..ಕೈ ಇಟ್ಟರೆ ರೋಮಾಂಚನ ವಾಗುತ್ತೆ ಅನ್ನುತ್ತಾನೆ...ಆಗ ಉಳಿದವರು ಆಶ್ಚರ್ಯ ಕುತೂಹಲದಿಂದ ಅದನ್ನೇ ಅನುಸರಿಸುತ್ತಾರೆ.....ಹೀಗೆ ನಮ್ಮ ಸಮಾಜದಲ್ಲೂ ಕೂಡ ಎಷ್ಟೊಂದು ಮೌಡ್ಯಗಳು ಇಂತಹದ್ದೇ ತಳಹದಿಯಲ್ಲಿ ನಿಂತಿದೆ...ತಮಗೆ ಸಿಗದ್ದು ಬೇರೆಯವರಿಗೂ ಸಿಗಬಾರದೆಂಬ ಉದ್ದೇಶಕ್ಕೆ ಎಷ್ಟೊಂದು ಡಂಬಾಚಾರ ,ಕಟ್ಟುಪಾಡುಗಳನ್ನ ಹೇರಿದ್ದಾರೆ....ನಾವು ಅದನ್ನೇ ಕುರಿಮಂದೆಗಳಂತೆ ಅನುಸರಿಸುತ್ತ ಇದ್ದೀವಿ ಕೂಡ...ಯೋಚನಾ ಶಕ್ತಿ ಇದ್ದೂ ನಮ್ಮ ನಿರ್ಧಾರ ನಾವು ತೆಗೆದುಕೊಳ್ಳದಂತ ಪರಿಸ್ಥಿತಿಯಲ್ಲಿ...

No comments:

Post a Comment