Monday 6 October 2014

ನಾಳೆ ಗಣೇಶನ ಹಬ್ಬ..ನಾವು ಹಬ್ಬ ಆಚರಿಸೋ ಮುನ್ನ ಗಣೇಶನ ದೇಹ ರಚನೆ ಕುರಿತು ಸ್ವಲ್ಪ ತಿಳ್ಕೊಂಡ್ರೆ ಇನ್ನು ಹೆಚ್ಚಿನ ಭಕ್ತಿ..ಸಂತೃಪ್ತಿ....ಇದು ಶ್ರೀ ಶ್ರೀ ರವಿಶಂಕರ ಗುರೂಜಿಯವರ ಪ್ರವಚನದ ಸಾರಾಂಶ ...ನನಗೆ ತಿಳಿದದ್ದನ್ನ ಬರಿತಿದ್ದೀನಿ..ತಪ್ಪಿದ್ದರೆ ಯಾರಾದ್ರೂ ತಿಳಿದವರು ಇದ್ದರೆ ಅವರ ಅಭಿಪ್ರಾಯ ತಿಳಿಸಿ..ನಾನೂ ಹೆಚ್ಚಿನದನ್ನ ತಿಳ್ಕೋತೀನಿ..
ಗಣೇಶ ಅಂದರೆ ಮನುಷ್ಯನ ದೇಹದ ಆನೆಯ ಮುಖದವ ..ಯೋಚಿಸಿದಾಗ ಆಶ್ಚರ್ಯ ಆಗುತ್ತೆ...ಮನುಷ್ಯನಿಗೆ ಅಷ್ಟು ದೊಡ್ಡ ಪ್ರಾಣಿಯ ತಲೆ ಸರಿ ಹೋಗುತ್ತಾ ಅಂತ...ಆದರೆ ಇದರ ಆಧ್ಯಾತ್ಮಿಕ ಅರ್ಥ...ಎಲ್ಲ ಜೀವಿಗಳಲ್ಲಿ  ಮನುಷ್ಯ ಶರೀರ  ಉತ್ತಮವಾದದ್ದು...ಹಾಗೆ ಎಲ್ಲ ಜಿವಿಗಳಲ್ಲಿ ದೂಡ್ಡ ತಲೆ ಅಂದರೆ ಆನೆಯದ್ದು..ದೊಡ್ಡ ತಲೆ ಅಂದರೆ ಅನಂತ ಜ್ಞಾನದ ಸಂಕೇತ. ಅಂದರೆ ಉತ್ತಮ ಶರೀರದಲ್ಲಿ ಅನಂತ ಜ್ಞಾನ ಶಕ್ತಿ ಹೊಂದಿರುವವನು...ಇನ್ನು ಸೊಂಡಿಲು ..ಅಂದರೆ ಮೂಗು ..ಮೂಗು ನಮಗೆ ಬರೆ ಜ್ಞಾನೇಂದ್ರಿಯ ಆದರೆ ಆನೆಗೆ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯ....ಆನೆಯ ಕಣ್ಣು ಚಿಕ್ಕದ್ದು ಮತ್ತು ಕಿವಿ ದೊಡ್ಡದು . ನೋಡೋದಕ್ಕೂ ಕೇಳೋದಕ್ಕೂ ಸಮನ್ವಯ ಕಲ್ಪಿಸಿಕೊಂಡರೆ ಮಾತ್ರ ಜ್ಞಾನ ಉಂಟಾಗುತ್ತೆ. ಆನೆ ಕಿವಿಯಿಂದ ಆಗಾಗ ಕಣ್ಣಿಗೆ ಬೀಸಿಕೊಳ್ಳುತ್ತೆ ಅಂದರೆ ನೋಡೋದಕ್ಕೂ ಕೇಳೋದಕ್ಕೂ ಸಮನ್ವಯ ತಂದುಕೊಳ್ಳುತ್ತೆ. ಆಗ ಮಾತ್ರ ಯಾವದೇ ವಿಷಯ ಸತ್ಯವಾಗೋಕೆ ಸಾಧ್ಯ. ಹಾಗೆ ಕೃತ್ಯಕ್ಕೂ ವಾಸನೆಗೂ ಸಂಬಂಧ ಕಲ್ಪಿಸುತ್ತೆ ಸೊಂಡಿಲು. ಆನೆ ಸೊಂಡಿಲಿಂದ ಸ್ನಾನ ಮಾಡುತ್ತೆ ಅಂದರೆ ಜ್ಞಾನೇಂದ್ರಿಯದಿಂದ ಸ್ನಾನ ಮಾಡೋದು ಆನೆ ಮಾತ್ರ. ಗಣ ಅಂದರೆ ಗುಂಪು...ಗಣ ಅಂತಾಗಬೇಕಾದರೆ ಅದರಲ್ಲಿ ಶಿವ ಮತ್ತು ಶಕ್ತಿ ಎರಡೂ ಇರಬೇಕು. ಅಲ್ಲಿ ಒಂದು ನಿಯಮ ಇರುತ್ತೆ..ಆ ನಿಯಮವನ್ನ ಹೊಂದಿರುವಂತವನು ಅಂದರೆ ಗಣಪತಿ. ಇನ್ನು ಗಣೇಶನಿಗೆ ದೊಡ್ಡ ಹೊಟ್ಟೆ ಇದೆ..ದೊಡ್ಡ ಹೊಟ್ಟೆ ಸಂತೋಷದ ಪ್ರತೀಕ. ಜ್ಞಾನ ಇದ್ದವನ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತೆ ..ಇದರ ಇನ್ನೊಂದು ಅರ್ಥ ಉದಾರತೆ...ಉದಾಹರಣೆ..ಸಾಂತ ಕ್ಲಾಸ್, ಲಾಫಿಂಗ್ ಬುದ್ಧ ಎಲ್ಲರಿಗೂ ದೊಡ್ಡ ಹೊಟ್ಟೆ ಅಂದರೆ ಉದಾರತೆಯನ್ನ ತೋರಿಸುತ್ತೆ. ಯಾವಾಗಲೂ ಜ್ಞಾನದ ಜೊತೆ ಸಂತೋಷ , ಉದಾರತೆ ಇರಲೇ ಬೇಕು ಇಲ್ಲದಿದ್ದರೆ ಜ್ಞಾನ ಬಂದಿಲ್ಲ ಅಂತಾನೆ ಅರ್ಥ. ಹೊಟ್ಟೆಯ ಸುತ್ತ ಒಂದು ಹಾವು ಸುತ್ತಿರೋದು..ಹಾವು ಪ್ರಜ್ಞೆಯ ಸಂಕೇತ. .ಅಂದರೆ ಸ್ವೀಕಾರ ಇರಬೇಕು,,ಸಂತೋಷ.ಇರಬೇಕು .ಎಲ್ಲದರ ಜೊತೆ ಪ್ರಜ್ಞೆ ಇರಬೇಕು ..ಇನ್ನೊಬ್ಬರ ಭಾವನೆಯ ಜೊತೆ ಸಂವೇದನಾ ಶೀಲತೆ ಇರಬೇಕು. ಇನ್ನು ಕೈಯ್ಯಲ್ಲಿ ಪಾಶ ಮತ್ತು ಅಂಕುಶ ...ಅಂಕುಶ ಎಚ್ಚರಿಸುವಂತದ್ದು..ಅಂದರೆ ಶಕ್ತಿಯನ್ನ ಜಾಗರೂಕತೆ ಮಾಡುವದು..ಶಕ್ತಿ ಜಾಗೃತಿಯಾದಾಗ ಅದನ್ನ ಹಿಡಿತದಲ್ಲಿಟ್ಟು ಕೊಳ್ಳಲು ಪಾಶ ಬೇಕು. ಇಲ್ಲದಿದ್ದರೆ ಜ್ಞಾನ ಎಲ್ಲೆಂದರಲ್ಲಿ ಓಡುತ್ತೆ ..ಕುದುರೆ ಸರಿಯಾಗಿ ಓಡಲು ಹೇಗೆ ಕಡಿವಾಣ ಬೇಕೋ ಹಾಗೆ..ಇಲ್ಲದಿದ್ದರೆ ಜ್ಞಾನ ವಿನಾಶಕ್ಕೆ ಎಡೆ ಮಾಡಿಕೊಡುತ್ತೆ...ಇನ್ನೊಂದು ಕೈಯ್ಯಲ್ಲಿ ಮೋದಕ ..ಮೋದ ಅಂದರೆ ಸಂತೋಷ..ಕ ಅಂದರೆ ಇಂದ್ರಿಯ..ಯಾವದು ನಮ್ಮ ಎಲ್ಲ ಇಂದ್ರಿಯಗಳಿಗೆ ಸಂತೋಷವನ್ನು ಕೊಡುತ್ತದೋ ಅದು ಮೋದಕ...ಅಂದರೆ ಜ್ಞಾನ ನಮ್ಮ ಮನಸ್ಸಿಗೆ ಮಾತ್ರ ಅಲ್ಲ ಎಲ್ಲ ಇಂದ್ರಿಯಗಳಿಗೂ ಸಂತೋಷ ತಂದುಕೊಡುತ್ತದೆ...ಇನ್ನು ಇಲಿ ಮೇಲೆ ಕುಳಿತಿದ್ದು...ಜ್ಞಾನ ಬರಬೇಕಿದ್ದರೆ ದೂಡ್ಡ ಕೆಲಸದಿಂದ ಬರಬೇಕೆಂದೇನು ಇಲ್ಲ..ಒಂದು ಚಿಕ್ಕ ವಿಷಯವು ಸಾಕು...ಮೂಶಕದ ಸ್ವಭಾವ ಕತ್ತರಿಸುವಂತದ್ದು,..ಅಂದರೆ ಮೂಷಿಕ ತರ್ಕದ ಪ್ರತೀಕ ...ಜ್ಞಾನ ಕೇವಲ ಒಂದು ಚಿಕ್ಕ ಮಂತ್ರದಿಂದಲೂ ಬರಬಹುದು...ಉದಾ-ಕನಕ ದಾಸ.ಕವಿರತ್ನ ಕಾಳಿದಾಸ....ಒಂದು ಚಿಕ್ಕ ಮಂತ್ರ ಕೂಡ ಅಜ್ಞಾನದ ಪರದೆ ಕಡಿಯುತ್ತದೆ....ವಿಧ್ಯಾದಿ ದೇವತೆಯ ಆವಿರ್ಭಾವ ಉಂಟಾಗುತ್ತೆ...ಅದಕ್ಕಾಗಿ ಒಂದು ಚಿಕ್ಕ ಇಲಿಯಮೇಲೆ ಗಣೇಶ ಕುಳಿತಿದ್ದು...
ಇನ್ನೊಂದು ಮೂಷಿಕ ಅಂದರೆ ಬರೆ ಇಂದ್ರಿಯ ಜಾಡಿನಲ್ಲೇ ಸುತ್ತೋ ಮನಸ್ಸನ್ನ ಮೂಲಕ್ಕೆ ಒಯ್ಯೋದು ..ಇಲಿ ಏನೇ ದೊರೆತರೂ ಅದನ್ನ ತನ್ನ ಬಿಲ ಅಂದರೆ ಮೂಲಕ್ಕೆ ಒಯ್ಯೋದು...ಹಾಗೆ ಮನಸ್ಸನ್ನ ಅಂತರ್ಮುಖ ವಾದಾಗ ಮೂಲಕ್ಕೆ ಸೇರುತ್ತೆ ಆಗ ಜ್ಞಾನ ಉಂಟಾಗೋದು...ಯಾವಾಗ ಜ್ಞಾನ ಉಂಟಾಗುತ್ತೋ ಆಗ ವಿಘ್ನಗಳೆಲ್ಲಾ ವಿಘ್ನ ವಾಗಿ ಉಳಿಯೋಲ್ಲ ...ಇವೆಲ್ಲ ಜೀವನದ ಘಟನೆಗಳು ..ಅನ್ನೋ ಸಮಗ್ರ ದೃಷ್ಟಿ ಕೋನ ಉಂಟಾಗುತ್ತೆ....ಇವು ಗಣೇಶನ ಸ್ವರೂಪದ ವಿಷಯ.....ಇನ್ನು ಚೌತಿ ದಿನ ಚಂದಿರನನ್ನ ನೋಡಬಾರದು ಅನ್ನೋ ವಿಷಯ..ಚಂದಿರ ಅಂದರೆ ಮನಸ್ಸಿನ ಪ್ರತೀಕ...ಎಷ್ಟೋ ಸಲ ಬುದ್ಧಿ ಹೇಳಿದ್ದನ್ನ ಮನಸ್ಸು ಕೇಳೋಲ್ಲ..ಹಾಗೆ ಮನಸ್ಸಿನ ಪ್ರತೀಕ ಚಂದ್ರ ಬುದ್ಧಿ ದೇವತೆಯಾದ ಗಣಪತಿಯನ್ನ  ನೋಡಿ ನಕ್ಕ.. ಆಗ ಗಣೇಶ ಒಂದು ಹಲ್ಲನ್ನ ಮುರಿದು ಚಂದ್ರನಿಗೆ ಎಸೆದ....ಯಾವಾಗಲೂ ಆನೆ ಅಗೆಯೋ ಹಲ್ಲು ಕಾಣೊಲ್ಲ..ಕಾಣೋ ಹಲ್ಲು ಅಗೆಯೋಲ್ಲ..ಅಂದರೆ ನಾವು ಯೇನಾಗಿರ್ತಿವೋ ಅದನ್ನ ವ್ಯಕ್ತ ಮಾಡಲು ಸಾಧ್ಯವಿಲ್ಲ...ವ್ಯಕ್ತ ಆಗೋದಷ್ಟೆ  ನಾವಲ್ಲ...ಒಳಗೆ ಬೇರೇನೆ ಆಗಿರ್ತಿವಿ....ಗಣೇಶ ಚಂದ್ರನಿಗೆ ನಿನ್ನ ಯಾರೂ ನೋಡದ ಹಾಗೆ ಆಗಲಿ ಎಂದು ಶಾಪ ಕೊಟ್ಟ..ಆದರೆ ಮನಸ್ಸೇ ಇಲ್ಲದಿದ್ದರೆ ಜಗ ನಡೆಯುವದಾದರೂ ಹೇಗೆ...ಅದಕ್ಕೆ ದೇವತೆಗಳೆಲ್ಲ ಬೇಡಿಕೊಂಡಾಗ ಗಣಪತಿ ಕರುಣಾಪೂರಿತ ನಾಗುತ್ತಾನೆ...ಇಲ್ಲಿ ದೈವಿ ಗುಣ ಅಂದರೆ ಕರುಣೆ..ಆಗ ಪರಿಹಾರ ಸೂಚಿಸುತ್ತಾನೆ...ಚೌತಿ ದಿನ  ಮಾತ್ರ ಚಂದ್ರನ ನೋಡಬಾರದು ಅಂತ... ಬುದ್ಧೀಗೆ ವಿರುದ್ಧವಾದ ಮನಸ್ಸನ್ನ ಯಾವತ್ತೂ ಕೇಳ ಬಾರದು ಅನ್ನೋ ಸಂದೇಶವನ್ನ ತಿಳಿಸಲಿಕ್ಕಾಗಿ...ಇದೊಂದು ನಿರೋಪಣೆ..




2 comments:

  1. ಈ ಬರಹ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.

    ReplyDelete
  2. ಧನ್ಯವಾದಗಳು.....ಬದರಿನಾಥ್ ಸರ್

    ReplyDelete