Saturday 1 September 2012

ನೀರೀಕ್ಷೆ
ನನ್ನ ನೆನಪಲಿ ಒಮ್ಮೆ
ಬರಲಾರೆಯ ಗೆಳೆಯಾ
ಬವಬಂಧಗಳ ಸರಿಸಿ
ನೀ ಬಳಿ ಸಾರಲಾರೆಯ
ಬೇಡವೆಂದರೂ ಈ ಹುಚ್ಚುಮನ
ರಚ್ಚೆ ಹಿಡಿದು ತಾ ರೋಧಿಸಿದೆ
ಕಣ್ಣೆರಡು ಕಾತರಿಸಿ
ಕೊಳವಾಗಿ ಹರಿಯುತಿದೆ
ಯಾಕಿಂತ ಮೌನ
ಕಲ್ಲಾಯಿತೆ ಹೃದಯ
ಕಿವಿಗೊಟ್ಟು ಆಲಿಸಲು ಕಾಡುತಿದೆ
ಕರಗಿಬಿಡುವೆನೆಂಬ ಭಯ
ಬೇಡ ಈ ಮುಖವಾಡ
ಕಿತ್ತೆಸೆದು ತೋರು ನೈಜತೆಯ
ಒಮ್ಮೆ ಹಿಂತಿರುಗಿ ನೋಡು
ನೀ ನಡೆದ  ಹಾದಿಯ
ಬೆಂಡಾಗಿ ಬಸವಳಿದು ಕಾಯುತಿಹೆ
ಹಗಲಲ್ಲಿ ಕಾಣೋ ಚಂದ್ರನಾ ಶವದಂತೆ
ತಂಗಾಳಿಯಂತೆ ನೀ ಬಂದು ಮುಖತೋರು
ಸತ್ತ ಕನಸಿಗೆ ನೀ ಮರುಜನ್ಮ ನೀಡು  

No comments:

Post a Comment