Thursday 30 May 2013

ಹೃದಯ ರಾಗ

ಎಸೆದು ಹೊರಟ ಕೊಳಲನೆತ್ತಿ
ಮತ್ತೆ ನುಡಿಸಿದೆ
ಶೃತಿಯು ಯಾಕೋ ಸೇರಲಿಲ್ಲ
ಭಾವ ಸೆಲೆಯಲಿ

ಕೊರಳು ಉಬ್ಬಿ ಮನವ ತಬ್ಬಿ
ಉಸಿರಿಗೂ ಕಷ್ಟ
ಸಾಧನೆಯೇನೊ ಸಡೆಸುತ್ತಿತ್ತು
ದುಃಖ ತಪ್ತ ಚಿತ್ತ

ಹಾಡುಯೇನೊ ರಾಗವೇನೊ
ಲಯವ ತಪ್ಪಿದೆ
ಮನವು  ಎಲ್ಲೋ ಕಳೆದು ಹೋಗಿ
ಹೃದಯ ದ್ರವಿಸಿದೆ


ಖುಷಿಯ ರಾಗ ಹೇಗೆ ಸಾದ್ಯ
ಮುರಿದ ಹೃದಯದಿ
ಶೋಕ ರಸವೇ ಹೊಮ್ಮುತಿತ್ತು
ಬೆಂದ ಮನದಲಿ,ಈ ಎಸೆದ ಕೊಳಲಲಿ

No comments:

Post a Comment