ಮೇಲು ಕೀಳು
ಹಣಕ್ಯಾಕಿಲ್ಲ ಜಗದಲ್ಲಿ
ಕೀಳ್ಜಾತಿಯವ ಅಸ್ಪ್ರಶ್ಯನಾದರೆ
ಅವ ಮುಟ್ಟಿದ ಹಣಕ್ಕಿಲ್ಲವೇ ಈ ನೀತಿ
ಕೆಳವರ್ಗದವ ನಿಲ್ಲಬೇಕು
ಹೊಸ್ತಿಲಿಂದ ಹೊರಗೆ
ಅದೇ ಅವ ಕೊಟ್ಟ ಹಣ ಮಾತ್ರ
ಬರಬಹುದೇ ಒಳಗೆ
ಕಿಳ್ಜಾತಿಯ ಒಳ ಬಂದರೆ
ಆಗುವದವಗೆ ಕಪಾಳ ಮೋಕ್ಷ
ಅವ ತಂದ ಹಣವಾದರೆ
ಅದುವೇ ಲಕ್ಷ್ಮೀ ಕಟಾಕ್ಷ
ಮೇಲ್ಜಾತಿ ಕೀಳ್ಜಾತಿ ಎನ್ನುವಾ
ಬೇದವೇಕೆ ಹುಟ್ಟಿನಲ್ಲಿ
ಬುದ್ಧಿ –ನಡತೆಯಲಿ ಉತ್ತಮನೆ
ಮೇಲ್ಜಾತಿ ಯಲ್ಲವೇ
ಎಲ್ಲರ ಮೈಯಲ್ಲೂ ಹರಿವುದೊಂದೇ
ಕೆಂಪುರಕ್ತ
ಇದನರಿತ ಒಗ್ಗಟ್ಟಿನ ಬಾಳ್ವೆಯೇ
ಜಗದಲ್ಲಿ ಸೂಕ್ತ.
ನಮ್ಮ ಹಳ್ಳಿಗಾಡಲಿ ಅಷ್ಟೇ ಏಕೆ ನಗರಗಳಲ್ಲೂ ಇನ್ನೂ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದೇ ಇದೆ!
ReplyDeleteತಮಾಷೆ ಎಂದರೆ ಕೀಳು ಜಾತಿ ಎನ್ನುವವರು ಅವರೇ ಮಂತ್ರಿಗಳಾದರೇ ಸನ್ಮಾನಿಸುವರು!
http://badari-poems.blogspot.in
ಎಲ್ಲಾ ಹಣ ಮತ್ತು ಅಧಿಕಾರದ ಮಹಿಮೆ
Deleteನೀವು ಹೇಳುವುದು 100% ಸತ್ಯ ಇದು ನಿತ್ಯವು ನಡಿತಿದೆ.
ReplyDeleteಇದಕ್ಕೆ ಪರಿಹಾರ ಭೂ ಪ್ರಳಯ ಇಲ್ಲಾ ಸಾದ್ಯವೇ ಇಲ್ಲ.
www.kannada143musiq.blogspot.com
and
www.songs143musiq.blogspot.com
ಧನ್ಯವಾದಗಳು
ReplyDelete