Friday 8 February 2013


ಗೈರು
ಇಂದೇಕೋ ಅನಿಸುತಿದೆ ಗೆಳೆಯಾ
ಹೇಳಬೇಕೆಂದು ನಿನಗೆ ವಿದಾಯ
ಬರಡಾಗಿ ನಿಂತಿವೆ ಕನಸು ಫಲಿಸದೆ ನೀ ಕೊಟ್ಟ ಅಭಯ
ಬದುಕ ಬೇಕೆನಿಸಿದೆ ಬೇಡದೆ ಯಾರ ಹಂಗಿನ ಸಹಾಯ

ನನ್ನ ಜಾಗದಲಿ ಕಾಣುತಿದೆ ಬೇರೆಯದೇ ನೆರಳು
ಕಾಣದಾಗಿದೆ ನಿನಗೆ ವೇದನೆಯಲಿ ಹೊಯ್ದಾಡೋ ನನ್ನ ಕರುಳು
ನಾ ತಿಳಿದಿದ್ದೆ ನೀ ನನಗೆ ಆ ದೇವರು ಕೊಟ್ಟ ಹರಳು
ನನ್ನ ಮನಸೇ ಗಹಗಹಿಸಿದೆ ಪೆದ್ದಿ ನಿನಗೆಲ್ಲೋ ಮರುಳು

ಸ್ವಾಭಿಮಾನವ ತುಂಬುವಲ್ಲಿ ದಾರಾಳಿಯಾದ ಆ ದೇವರು
ಬದುಕೋ ಛಲ ಮೂಡಿಸಿದ ಇದ್ದರೂ ನಿನ್ನ ಗೈರು
ನಿನಗಾಗಿ ಪರಿತಪಿಸಿ ಸುರಿಸಲು ಬತ್ತಿದೆ ಕಣ್ಣೀರು
ಆಧ್ಯಾತ್ಮ ಸತ್ಯ ಬದುಕಲ್ಲಿ ಯಾರಿಗುಂಟು ಯಾರು 

No comments:

Post a Comment