Thursday 10 April 2014

ಹಲವು ಹತ್ತು ಜನ್ಮಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ. ಆದರೆ ಎಂತಹುದೇ ಶ್ರೇಷ್ಠ ಜನ್ಮಕ್ಕೂ ಸಾವು ಅನ್ನೋದು ತಪ್ಪೊಲ್ಲ. ಪ್ರತಿ ಹುಟ್ಟಿನ ಹಿಂದೆ ಸಣ್ಣ,ದೊಡ್ಡ ಅನ್ನೋ ಬೇದವಿಲ್ಲದೆ ಸಾವು ಖಚಿತ. ನಾವು ಯಾವುದರಿಂದ ಬೇಕಾದ್ರೂ ತಪ್ಪಿಸಿಕೊಳ್ಳ ಬಹುದು ಆದರೆ ಈ ಸಾವಿನಿಂದ ತಪ್ಪಿಸಿಕೊಳ್ಳೋಕೆ ಯಾವ ಬಲ, ಪ್ರಭಾವವೂ ಪ್ರಯೋಜನಕ್ಕೆ ಬರದು.ಪಾತಾಳಕ್ಕೆ ಹೋಗಿ ಅಡಗಿದರೂ ನಮ್ಮನ್ನೇ ಅನುಸರಿಸೋ ಸಂಗಾತಿ ಇದು. ಆದರೆ ಯಾರಿಗೆ,ಯಾವಾಗ ಎನ್ನೋದು ಮಾತ್ರ ಕೌತುಕವಾಗೇ ಇರುವಂತದ್ದು. ಏನಾದರೂ ದೊಡ್ಡ ರೋಗ ಬಂದು ಆಸ್ಪತ್ರೆ ಸೇರಿದರೆ ಡಾಕ್ಟರ್ ಇಷ್ಟು ದಿನ , ಇಷ್ಟು ತಿಂಗಳು ಅಂತ ಅಂದಾಜಿಸಿ ಅವರ ಬುದ್ದಿವಂತಿಕೆ ಪ್ರದರ್ಶನ ಮಾಡಬಹುದು. ಆದರೂ ನಿಖರವಾಗಿ ಹೇಳೊದು ಅಸಾಧ್ಯ.ಹೀಗಿರುವಾಗ ನಾವು ಎಂದೋ ಬರುವ ಸಾವಿಗಾಗಿ ಅಂಜೋದು ಎಷ್ಟರ ಮಟ್ಟಿಗೆ ಸರಿ.ಈ ಜನ್ಮದಲ್ಲೇ ನಾವು ಏನನ್ನಾದರೂ ಸಾಧಿಸಬೇಕು ಅಂತಿದ್ದರೆ ಮೊದಲು ನಾವು ಸಾವಿನ ಭಯ ಬಿಡಬೇಕು.ಈ ಭಯದಿಂದ ನಾವು ದೂರವಾಗದಿದ್ದರೆ ನಾವು ಏನನ್ನೂ ಸಾಧಿಸಲಾರೆವು.ಮಹತ್ತರವಾದ ಗುರಿಯ ಕಡೆ ಸಾಗುವಾಗ ಈ ಸಾವು ಅನ್ನೋ ಹೆದರಿಕೆ ಬಂದರೆ - ಅಯ್ಯೋ ನಾವು ಯಾಕಾಗಿ ಈ ಕೆಲಸ ಮಾಡಬೇಕು, ನಾನು ಮಧ್ಯದಲ್ಲೇ ಸತ್ತರೆ ಈ ಕೆಲಸ ಅಪೂರ್ಣ ವಾದೀತು ಅಥವಾ ಈ ಕೆಲಸ ಸಾಧಿಸಿ ಫಲ ಅನುಭವಿಸಲು ನಾನು ಇರುತ್ತಿನೋ ಇಲ್ಲವೋ..ಹೀಗೆ ಹಲವು ಹತ್ತು ನಕಾರಾತ್ಮಕ ಯೋಚನೆಗಳು ನಮ್ಮನ್ನು ಗುರಿಯ ಕಡೆ ಸಾಗದಂತೆ ತಡೆಯುತ್ತವೆ. ಅದಕ್ಕಾಗಿ ನಾವು ಸಾವಿನ ಭಯ ತೊರೆದು ಗುರಿಯ ಕಡೆ ಗಮನ ಹರಿಸೋಣ. Marquis de Veuvenargues ಹೇಳಿದ ಹಾಗೆ "To achieve great things we must live as though we were never going to die." ಅನ್ನೋ ಹಾಗೆ ಬದುಕೋಣ ಗುರಿಯ ಕಡೆ ಸಾಗೋಣ. ಸಾವು ಬಂದಾಗ ಬರುತ್ತೆ ಅದಕ್ಕಾಗಿ ಹೆದರದೆ ನಕಾರಾತ್ಮಕತೆ ಯನ್ನ ಓಡಿಸಿ ಸಕಾರಾತ್ಮಕವಾಗಿ ಯೋಚಿಸಿ ಸಾವಿಲ್ಲದ ಸರದಾರರು ಎಂದುಕೊಂಡು ಈ ಜೀವನದಲ್ಲಿ ಏನನ್ನಾದರೂ ಒಳ್ಳೆಯದನ್ನ ಸಾಧಿಸೋಕಡೆ ಗಮನ ಹರಿಸಿ ಜಯಶಾಲಿಗಳಾಗೋಣ.

4 comments:

  1. ಸಾವಿನೆಡೆ ಚಿಂತಿಸುತ ಕಳೆದುಕೊಂಡ ಅಮೂಲ್ಯ ಬದುಕಿನ ಕ್ಷಣಗಳನ್ನು ಮರಳಿ ಪಡೆಯಲಾರೆವು. ತಮ್ಮ ಈ ಲಘು ಬರಹ an eye opener ನಿಜ.

    ReplyDelete
  2. ಧನ್ಯವಾದಗಳು

    ReplyDelete
  3. This comment has been removed by the author.

    ReplyDelete
  4. ಅಮೂಲ್ಯವಾದ ಮಾತುಗಳು

    ReplyDelete